ಮಹಿಳೆಯರಿಗಾಗಿ, ಮಹಿಳೆಯರಿಂದ ಎನ್ನುವ ಪರಿಕಲ್ಪನೆಯೊಂದಿಗೆ ಅಸ್ತಿತ್ವಕ್ಕೆ ಬಂದ ಅಪೂರ್ವ ಕಣ್ಮಣಿ ಪತ್ರಿಕೆ, ಎರಡು ವರ್ಷಗಳ ನಂತರ ಪುನರಾರಂಭಗೊಂಡ ಸಂಚಿಕೆಯಿಂದಲೇ ಓದುಗರ ಬೆಂಬಲವನ್ನು ಪಡೆದುಕೊಳ್ಳುತ್ತಿದೆ. ಮತ್ತೆ ನಮ್ಮನ್ನು ಬೆಂಬಲಿಸುತ್ತಿರುವ ಎಲ್ಲರಿಗೂ ನಮ್ಮ ತಂಡದ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು.
ಎಲ್ಲಾ ಓದುಗರು ಪತ್ರಿಕೆಯನ್ನು ಓದಿ ನಮ್ಮ ಬೆನ್ನು ತಟ್ಟುವುದರ ಜೊತೆಗೆ, ತಮ್ಮ ಸಲಹೆ, ಸೂಚನೆಗಳನ್ನು ಕೊಟ್ಟರೆ ಪತ್ರಿಕೆಯನ್ನು ಇನ್ನೂ ಉತ್ತಮಗೊಳಿಸಬಹುದು. ಇದರೊಂದಿಗೆ ಓದುಗರೆಲ್ಲರೂ ಲೇಖನ, ಕಥೆ, ಕವನಗಳನ್ನು ಕಳಿಸಿಕೊಡಬೇಕಾಗಿ ಮನವಿ. ಇಚ್ಛಿಸಿದರೆ, ಪ್ರತಿಯೊಬ್ಬರೂ ಬರೆಯಬಹುದು. ಮನಸ್ಸು ಮಾಡಿ ಬರೆಯಲು ಆರಂಭಿಸಬೇಕು ಅಷ್ಟೇ. ಅದು ಚೆನ್ನಾಗಿರುವುದಿಲ್ಲ ಎಂಬ ಹಿಂಜರಿಕೆ ಬೇಡ. ಯಾವ ಮಹಾನ್ ಬರಹಗಾರರ ಮೊದಲ ಕೃತಿ, ಅತ್ಯದ್ಭುತ ಕೃತಿಯಾಗಿರಲಿಲ್ಲ. ಹಲವಾರು ಬಾರಿ ಎದ್ದು, ಬಿದ್ದು ಕೊನೆಗೆ ಸಾಧನೆಗೈದಿರುತ್ತಾರೆ. ಹಾಗಿದ್ದರೆ, ಇನ್ನು ತಡವೇಕೆ. ಬರೆಯಬೇಕು ಎಂದುಕೊಂಡವರು ಬರೆಯಲಾರಂಭಿಸಿ, ಈ ಮಿಂಚಂಚೆಗೆ ಕಳಿಸಿಕೊಡಿ -
No comments:
Post a Comment